‘ಕರ್ವ’ ನಾಳೆಯಿಂದ ತೆರೆಗೆ
Posted date: 26 Thu, May 2016 – 10:20:47 AM

ನಾಳೆಯಿಂದ  ಮತ್ತೊಂದು ಹಾರರ್ ಹಾಗೂ ಥ್ರಿಲ್ಲರ್ ಅನುಭವ ನೀಡುವ ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿದೆ. ‘ಕರ್ವ’ ಎಂದರೆ ಬಿಡಿಸಲಾಗದ ರಹಸ್ಯ. ಅದನ್ನು ಹೇಗೆ ಎರಡು ಆಯಾಮಗಳಲ್ಲಿ ನಿರ್ದೇಶಕ ನವನೀತ್ ಅವರು ಹೇಳುತ್ತಾರೆ ಎಂಬುದು ಕುತೂಹಲದ ವಿಷಯ. ಈ ಚಿತ್ರ ತಂಡ ಕೆಲವು ಭಾಗಗಳನ್ನು ಶ್ರೀ ಲಂಕ ದೇಶದಲ್ಲೂ ಚಿತ್ರೀಕರಣ ಮಾಡಿದೆ.
ಕನ್ನಡದಲ್ಲಿ ೬-೫=೨ ಚಿತ್ರ ನಿರ್ಮಾಣ ಮಾಡಿ ದೊಡ್ಡ ಯಶಸ್ಸನ್ನು ಪಡೆದ ನಿರ್ಮಾಪಕ ಕೃಷ್ಣ ಚೈತನ್ಯ ಈ ಸಿನಿಮಾವನ್ನು ಶ್ರೀ ಸ್ವರ್ಣ ರಥ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದರೆ. ಈ ಚಿತ್ರದಲ್ಲಿ ಥ್ರಿಲ್ ಹಾಗೂ ರಹಸ್ಯ ಮುಖ್ಯ ಟ್ರಾಕ್ ಆಗಿ ಸಾಗುವುದು.
ಆರ್ ಜೆ ರೋಹಿತ್, ತಿಲಕ್, ದೇವರಾಜ್, ಅನೀಶ, ಅನು, ವಿಜಯ್, ಚಂದು ಅಲ್ಲದೆ ಬಹು ಮುಖ್ಯ ತಿರುವಿನಲ್ಲಿ ಹೆಸರಾಂತ ನಾಯಕಿ ಪೂನಂ ಅವರ ಅತಿಥಿ ಪಾತ್ರವಿದೆ. ಶ್ರೀ ನಿವಾಸ್ ಪ್ರಭು, ಸಿದ್ಲಿಂಗು ಶ್ರೀಧರ್, ಪದ್ಮಜ ರಾವ್ ಸಹ ತಾರಾಬಳಗದಲ್ಲಿ ಇದ್ದಾರೆ.
ರವಿ ಬಸ್ರೂರ್ ಅವರ ಹಿನ್ನಲೆ ಸಂಗೀತ, ಮೋಹನ್ ಅವರ ಛಾಯಾಗ್ರಹಣ, ಡಿಫರೆಂಟ್ ಡ್ಯಾನಿ ಅವರ ಸಾಹಸ, ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಈ ಚಿತ್ರಕ್ಕೆ ಒದಗಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed